ಎರಡು ಊರುಗಳ ಕತೆ...

*ಎರಡು ಊರುಗಳ ಕತೆ...!*

ಕುತೂಹಲಕಾರಿಯಾದ ಕತೆಯೊಂದು ಇಲ್ಲಿದೆ! ಎರಡು ಊರುಗಳಿಗೆ, ಜನರುಗಳಿಗೆ ಸಂಬಂಧಿಸಿದ ಕತೆ!

ಒಮ್ಮೆ ಸಿಖ್ಖರ ಧರ್ಮಗುರುಗಳಾದ ಪೂಜ್ಯ ಗುರುನಾನಕ ದೇವರು ಒಂದೂರಿನ ಮೂಲಕ ಹಾದು ಹೋಗುತ್ತಿದ್ದರು. ಸಂಜೆಯ ಸಮಯವಾಗಿತ್ತು. ಅಂದು ರಾತ್ರಿ ತಂಗಲು ಊರಿನ ಯಾರದ್ದಾದರೂ ಮನೆಯಲ್ಲಿ ಊಟ-ವಸತಿ ಸಿಗುವುದೇನೋ ವಿಚಾರಿಸಲು ಶಿಷ್ಯರಿಗೆ ಹೇಳಿದರು. ಆದರೆ ಆ ಊರಿನವರು ಯಾರೂ ಗುರುನಾನಕರಿಗೆ ಮತ್ತವರ ಶಿಷ್ಯರುಗಳಿಗೆ ಒಂದು ದಿನದ ಮಟ್ಟಿಗೆ ಊಟ-ವಸತಿಯನ್ನು ನೀಡಲು ಮುಂದೆ ಬರ ಲಿಲ್ಲ. ಕೆಲವರು ನೇರವಾಗಿಯೇ ನಿರಾಕರಿಸಿದರೆ, ಕೆಲವರು ಅವರನ್ನು ಅನುಮಾನ ದಿಂದ ನೋಡಿದರು. ದೂಷಣೆಯ ಮಾತುಗಳನ್ನಾಡಿದರು. ನಿಂದಿಸಿದರು. ಅವಮಾನ ಮಾಡಿದರು.

ಅನ್ಯಮಾರ್ಗವಿಲ್ಲದೆ ಗುರುನಾನಕರು ಶಿಷ್ಯರೊಂದಿಗೆ ಮರದ ಕೆಳಗೆ ರಾತ್ರಿಯನ್ನು ಕಳೆಯಬೇಕಾಯಿತು. ಅಂದು ರಾತ್ರಿ ಗುರುಗಳ ಭಜನೆ-ಸತ್ಸಂಗಗಳಿಗೂ ಊರಿನವರು ಒಬ್ಬರೂ ಬರಲಿಲ್ಲ.

ಮರುದಿನ ಗುರುಗಳು ಪ್ರಯಾಣವನ್ನು ಮುಂದುವರೆಸಲು ಹೊರಟು ನಿಂತಾಗ, ಆ ಊರಿನ ಹಲವಾರು ಜನ ಒಣ ಕುತೂಹಲದಿಂದ ಅವರನ್ನೇ ನೋಡುತ್ತ ನಿಂತಿದ್ದರು. ಹಿಂದಿನ ರಾತ್ರಿ ಉಪವಾಸವಿದ್ದ ಅಸಮಾಧಾನ ಗುರುಗಳ ಮುಖದಲ್ಲಿ ಕಾಣಿಸುತ್ತಿರಲಿಲ್ಲ. ಅವರು ಹಸನ್ಮುಖರಾಗಿದ್ದರು.

ಊರಿನವರೊಬ್ಬರು ಊರಿನವರಿಗೆ ಒಂದು ಆಶೀರ್ವಾದವನ್ನು ಮಾಡಿ ಹೋಗಿ ಎಂದರು. ಗುರುನಾನಕರು ನಸುನಗುತ್ತಾ ಒಳ್ಳೆಯದು. ಊರಿನವರೆಲ್ಲ ನಿಮ್ಮೂರಿನಲ್ಲೇ ಸುಖ ವಾಗಿ ಇರುವಂತೆ ಆಗಲೆಂದು ಹಾರೈಸುತ್ತೇವೆ ಎಂದು ಹೊರಟರು.

ಅಂದು ದಿನವಿಡೀ ಪ್ರಯಾಣ ಮಾಡಿ, ರಾತ್ರಿಯ ಹೊತ್ತಿಗೆ ಮತ್ತೊಂದು ಊರಿಗೆ ಬಂದರು. ಅವರು ತಮ್ಮ ಶಿಷ್ಯರಿಗೆ ಈ ಊರಿ ನಲ್ಲಾದರೂ ಊಟ-ವಸತಿಯ ವ್ಯವಸ್ಥೆ ಆಗುವುದೇನೋ ನೋಡಿ ಎಂದರು. ಆಶ್ಚರ್ಯವೆಂದರೆ ಈ ಊರಿನ ಜನರೆಲ್ಲ ಇವರನ್ನು ಬಹಳ ಆದರದಿಂದ ಬರಮಾಡಿಕೊಂಡರು. ಒಳ್ಳೆಯ ಔತಣಕೂಟವನ್ನೇರ್ಪಡಿಸಿದರು. ವಸತಿಗೂ ವ್ಯವಸ್ಥೆ ಮಾಡಿದ್ದರು. ಅಂದು ರಾತ್ರಿಯ ಸತ್ಸಂಗಕ್ಕೂ ಬಹಳ ಜನ ಬಂದಿದ್ದರು. ಗುರುನಾನಕರೂ ಮತ್ತವರ ಶಿಷ್ಯರು ಆನಂದದಿಂದ ರಾತ್ರಿ ಕಳೆದರು.

ಮರುದಿನ ಅವರೆಲ್ಲ ಹೊರಟು ನಿಂತಾಗ, ಊರಿನವರೆಲ್ಲ ಗೌರವದಿಂದ ಬೀಳ್ಕೊಟ್ಟರು. ಆಗ ಅವರೂ ಗುರುಗಳನ್ನು ತಮ್ಮೂರಿಗೆ ಒಳ್ಳೆಯ ಆಶೀರ್ವಾದ ಮಾಡಿ ಹೋಗಲು ಕೇಳಿಕೊಂಡರು.

ಆಗ ಗುರುನಾನಕ ದೇವರು ನಿಮಗೆಲ್ಲ ಒಳ್ಳೆಯದಾಗಲಿ. ನೀವೆಲ್ಲ ಊರು ಬಿಟ್ಟು ಹೋಗುವಂತಾಗಲಿ ಎಂದರು.

ಅವರ ಮಾತುಗಳನ್ನು ಕೇಳಿ ಊರಿನವರಿಗಿಂತ ಶಿಷ್ಯಂದಿರಿಗೇ ಹೆಚ್ಚು ಆಶ್ಚರ್ಯ. ಅವರು ’ನಿನ್ನೆ ಊಟ-ವಸತಿಯನ್ನೂ ನೀಡದೆ ಅನಾನುಕೂಲವನ್ನುಂಟು ಮಾಡಿದ ಊರಿನವರಿಗೆ ನೀವು ನಿಮ್ಮೂರಿನಲ್ಲೇ ಸುಖವಾಗಿರಿ ಎಂದು ಆಶೀರ್ವಾದ ಮಾಡಿದಿರಿ. ಆದರೆ ಬಹಳ ಚೆನ್ನಾಗಿ ನೋಡಿಕೊಂಡ ಈ ಊರಿನವರಿಗೆ ನೀವೆಲ್ಲ ಊರು ಬಿಟ್ಟು ಹೋಗು ವಂತಾಗಲಿ ಎಂದು ಹಾರೈಸುತ್ತೀರಲ್ಲಾ? ಎಂದು ಕೇಳಿದರು.

ಆಗ ಗುರುಗಳು ಆ ಊರಿನವರು ಒಳ್ಳೆಯ ಮಾತನ್ನಾಡುವುದಿಲ್ಲ. ಯಾರನ್ನೂ ಗೌರವಿಸುವುದಿಲ್ಲ. ಊಟ-ವಸತಿಗಳನ್ನು ನೀಡುವು ದಿಲ್ಲ. ಹಾಗಾಗಿ ಬೇರೆ ಯಾವುದಾದರೂ ಊರಿಗೆ ಹೋದರೆ ಬಹಳ ಕಷ್ಟವನ್ನು ಅನುಭವಿಸುತ್ತಾರೆ. ಹೊಸ ಊರಿನವರಿಗೂ ಅನಾನುಕೂಲ ಉಂಟು ಮಾಡುತ್ತಾರೆ. ಆದುದರಿಂದ ಅವರು ಅವರ ಊರಿನಲ್ಲೇ ಉಳಿಯುವುದು ಅವರಿಗೇ ಒಳ್ಳೆಯದು. ಆದರೆ ಈ ಊರಿನವರು ಸಜ್ಜನಿಕೆ ಉಳ್ಳವರು. ಅವರು ಎಲ್ಲಿ ಹೋದರೂ ಸಜ್ಜನಿಕೆಯಿಂದಲೇ ವರ್ತಿಸುತ್ತಾರೆ. ಸಜ್ಜನಿಕೆಯನ್ನು ಹರಡುತ್ತಾರೆ. ಅವರೂ ಸುಖವಾಗಿರುತ್ತಾರೆ. ಅವರು ಹೋದ ಊರಿನವರೂ ಸುಖವಾಗಿರುತ್ತಾರೆ. ಆದುದರಿಂದ ಅವರು ಊರು ಬಿಟ್ಟು ಹೊರಗೆ ಹೋಗಿ ಸಜ್ಜನಿಕೆಯನ್ನು ಹರಡುವಂತಾಗಲಿ ಎಂದು ಹಾರೈಸಿದೆ ಎಂದಾಗ, ಊರಿನವರೂ ಮತ್ತು ಶಿಷ್ಯರೂ ಆನಂದಪಟ್ಟರಂತೆ.

ದೇಶವೆಂದರೆ ಬರೀ ಮಣ್ಣಲ್ಲ!
ಅದು ಅಲ್ಲಿನ ಮನುಷ್ಯರು!
ಎಂಬ ಅರ್ಥ ಬರುವ ತೆಲುಗು ಮಾತೊಂದು ಇದೆ. ಅಲ್ಲಿನ ಮನುಷ್ಯ ರಿಂದಲೇ ಅಲ್ಲವೇ, ಆ ಊರಿಗೂ, ಊರಿನವರಿಗೂ ಒಳ್ಳೆಯದಾಗುವುದು! ಅವರ ಭಾವನೆಗಳಿಂದ ಶುಭ ಆಶೀರ್ವಾದಗಳು ದೊರೆ ಯುವುದು!


Good morning...
*SAVE TREES*🌳🌳🌳🌳🌳

Comments

Popular Posts